Friday 11 May 2012

ಏಕ ರೇಖಾ ಗಣಪ ಬಲು ಅಪರೂಪ

ಏಕ ರೇಖಾ ಗಣಪ ಬಲು ಅಪರೂಪ

S F Huseni Mysore

ವಿಘ್ನನಿವಾರಕ ಗಣೇಶನ ಚಿತ್ರವನ್ನು ಬಿಡಿಸುವವರು, ಮೂರ್ತಿ ಕೆತ್ತುವವರು ಬಹಳ ಮಂದಿ ಇದ್ದಾರೆ. ಆದರೆ ಕೇವಲ ಒಂದೇ ಸಾಲಿನ ಮೂಲಕ ಗಣೇಶನನ್ನು ಮೂಡಿಸುವ ಚಿತ್ರಕಾರರು ಸ್ವಲ್ಪ ವಿರಳವೆಂದೇ ಹೇಳಬಹುದು. ಈ ರೀತಿಯ ಅಪರೂಪದ ಚಿತ್ರ ಬಿಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಬಹು ಕಠಿಣ ಕಲೆಯನ್ನು ಒಲಿಸಿಕೊಂಡು ಚಿತ್ರವನ್ನು ರಚಿಸುವ ಕಲಾವಿದರೊಬ್ಬರಿದ್ದಾರೆ. ಅವರೇ ಸೈಯದ್ ಹುಸೈನಿ. 

ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಏಕ ರೇಖೆಯಲ್ಲಿ ಗಣೇಶನನ್ನು ಚಿತ್ರಿಸುತ್ತಾರೆ. ಇವರ ಚಿತ್ರದಲ್ಲಿ ಗಣೇಶನ ಕಿರೀಟದಿಂದ ಇಲಿಯ ಬಾಲದವರೆಗೂ ಕೇವಲ ಒಂದೇ ರೇಖೆ ಇರುವುದು ವಿಶೇಷ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಏಕರೇಖಾ ಗಣೇಶನ ಚಿತ್ರ ಬಿಡಿಸಿದ್ದಾರೆ.

ಹುಸೈನಿ ಮೊದಲ ಸಾರಿ ಚಿತ್ರ ಬಿಡಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಆ ನಂತರ ಅವರು ಇದುವರೆಗೂ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಲಲಿತಕಲೆಯಲ್ಲಿ ಪದವಿ ಮುಗಿಸಿರುವ ಇವರಿಗೆ ಚಿತ್ರ ಬಿಡಿಸುವುದು ನೀರು ಕುಡಿದಷ್ಟು ಸುಲಭ.

ಇವರು ಸುಮಾರು 3000ಕ್ಕೂ ಹೆಚ್ಚು ಏಕರೇಖಾ ಚಿತ್ರವನ್ನು ಬಿಡಿಸಿದ್ದಾರೆ. ಕೇವಲ ಗಣೇಶನ ಚಿತ್ರವನ್ನಷ್ಟೇ ಅಲ್ಲ, ಕುದುರೆ ಮುಂತಾದ ಹಲವು ಚಿತ್ರಗಳನ್ನು, ಹಲವು ವ್ಯಕ್ತಿಗಳ ಭಾವ ಚಿತ್ರಗಳನ್ನೂ ರಚಿಸಿದ್ದಾರೆ.

ಏಳೆಂಟು ವರ್ಷಗಳ ಹಿಂದೆ ಗಣೇಶನ ಚಿತ್ರ ಬಿಡಿಸಲು ಪ್ರಾರಂಭಿಸಿದ ಇವರಿಗೆ ಇಂದು ಏಕರೇಖಾ ಗಣೇಶನ ಚಿತ್ರ ಬಿಡಿಸಲು ಕನಿಷ್ಟ ಅರ್ಧ ಗಂಟೆ ಸಾಕು. ಕೆಲವೊಮ್ಮೆ ಕೆಲವು ಚಿತ್ರ ಬಿಡಿಸಲು ದಿನಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದೂ ಇದೆ. ಹುಸೈನಿ ಪ್ರಾರಂಭದಲ್ಲಿ ಗಣೇಶನ ಆಯಿಲ್ ಪೇಂಟ್ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಆ ನಂತರ ಒಂದು ದಿನ ಗಣೇಶನ ಚಿತ್ರವನ್ನು ಏಕರೇಖೆಯಲ್ಲಿ ಬಿಡಿಸುವ ಆಲೋಚನೆ ಮೂಡಿತು. ಆ ನಂತರ ಕೆಲವು ದಿನಗಳು ಪ್ರಯತ್ನಿಸಿ ಚಿತ್ರ ಬಿಡಿಸಲು ಪ್ರಾರಂಭಿಸಿದರು.

ಚಿಕ್ಕಂದಿನಲ್ಲಿ ಹುಸೈನಿ ಅವರ ತಾಯಿ ಉಲ್ಲನ್ನಿನ ಸ್ವೆಟರ್ ಹಾಕುವ ವೇಳೆ ಇವರು ಆ ಉಲ್ಲನ್ನಿನ ಉಂಡೆಯ ಜೊತೆ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೆ ಅದರಿಂದ ವಿವಿಧ ಚಿತ್ರಗಳನ್ನು ನೆಲದ ಮೇಲೆ ಮೂಡಿಸುತ್ತಿದ್ದರು. ಇದೇ ಅವರ ಏಕ ರೇಖಾ ಚಿತ್ರಕ್ಕೆ ಸ್ಫೂರ್ತಿ ನೀಡಿತು. ನಂತರ ಅವರ ತಾಯಿ ಹುಸೈನಿ ಅವರ ಕಲೆಗೆ ನೀರೆರೆದು ಪೋಷಿಸಿದರು.

ಚಿಕ್ಕಂದಿನಿಂದಲೆ ಒಲಿದುಬಂದ ಕಲೆಯನ್ನು ಬೆಳೆಸಿಕೊಂಡ ಇವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದರೂ ಹೆಸರು ಗಳಿಸಿದ್ದು ಏಕರೇಖೆಯ ಗಣಪನ ಚಿತ್ರಗಳ ಮೂಲಕ. ಕಷ್ಟದ ಕಲೆಯಲ್ಲೂ ವಿಭಿನ್ನತೆ ಮೆರೆದ ಇವರು, ನಿಂತಿರುವ ಗಣೇಶ, ಕುಳಿತ ಏಕದಂತ, ಇಲಿಯ ಮೇಲೆ ಗಣೇಶನ ಸವಾರಿ, ನೃತ್ಯ ಮಾಡುತ್ತಿರುವ ಗಣಪ-ಹೀಗೆ ಹಲವು ಬಗೆಯ ಗಣಪನ ಚಿತ್ರಗಳನ್ನು ಬಿಡಿಸಿದ್ದಾರೆ.

ಚಿತ್ರ ಬಿಡಿಸುವುದೇ ಇವರ ವೃತ್ತಿ. ಅವರು ಬಿಡಿಸಿರುವ ಅದೆಷ್ಟೋ ಚಿತ್ರಗಳು ಉತ್ತಮ ಬೆಲೆಗೆ ಮಾರಾಟವಾಗಿವೆ.
ಕೇವಲ ಚಿತ್ರ ಬಿಡಿಸುವುದು ಮಾತ್ರ ಇವರ ಕೆಲಸವಲ್ಲ. ಪೇಪರ್ ಕಟಿಂಗ್ನಲ್ಲೂ ಇವರದ್ದು ಎತ್ತಿದ ಕೈ. ಬಗೆಬಗೆಯ ನಮೂನೆ ಗಳು, ಹಲವು ಆಕಾರಗಳು ಇವರ ಕೈಯಲ್ಲಿ ಅರಳಿವೆ. ಇವರ ಕೈಗೆ ಕುಂಚ ಸಿಕ್ಕರೆ ಹೇಗೆ ಗೆರೆಗಳು ಮಾತನಾಡುತ್ತವೆಯೋ ಹಾಗೆಯೆ ಖಾಲಿ ಪೇಪರ್ ಹಾಗೂ ಕತ್ತರಿ ಸಿಕ್ಕರೆ ಸಾಕು ಅವು ಜೀವ ತಳೆಯುತ್ತವೆ. 

ಬೆಂಗಳೂರಿನ ಜಯನಗರದಲ್ಲಿ ವಾಸ ಮಾಡುತ್ತಿರುವ ಹುಸೈನಿ ಏಕರೇಖೆಯ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ಬಗ್ಗೆ ಹಲವು ಕಡೆ ತರಬೇತಿ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 34 ವರ್ಷದ ಹುಸೈನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು. 

ಅಂಚೆಕುಂಚ ಪ್ರಶಸ್ತಿಯನ್ನು ನಾಲ್ಕು ಸಾರಿ ಮುಡಿಗೇರಿಸಿ ಕೊಂಡಿರುವ ಹುಸೈನಿ 2009ರಲ್ಲಿ ಜಪಾನ್ ಹಬ್ಬದಲ್ಲೂ ಭಾಗವಹಿಸಿ ಬಂದಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಧಾರವಾಡ ಮುಂತಾದ ಕಡೆಗೆಲ್ಲ ಇವರು ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿದ್ದಾರೆ. ಹುಸೈನಿ ಅವರನ್ನು 9845153277. ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Friday 4 May 2012

sanjhi mask S.F.Huseni


Sanjhi Mask Poster


ºÉƸÀ C£ÀĨsÀªÀ ¤ÃqÀ°gÀĪÀ ºÀĸÉä ¥ÀæzÀ±Àð£À ªÉÄʸÀÆgÀÄ ºÀĸÉä

SÁåvÀ PÀ¯Á«zÀ ªÉÄʸÀÆgÀÄ ºÀĸÉä CªÀjAzÀ ¨sÁgÀwÃAiÀÄ PÀ¯Á¥ÀæPÁgÀUÀ¼À¯ÉÆèAzÁzÀ ¸ÁAf avÀæPÀ¯Á ¥ÀæzÀ±Àð£À …………gÀAzÀÄ …………£À°è £ÀqÉAiÀÄ°zÉ. C¥ÀgÀÆ¥ÀzÀ ¥ÁæaãÀ PÀ¯ÉAiÀiÁzÀ F ¸ÁAf PÀ¯Á¥ÀæzÀ±Àð£À «ÃPÀëPÀjUÉ MAzÀÄ «£ÀÆvÀ£À C£ÀĨsÀªÀªÀ£ÀÄß ¤ÃqÀ°zÉ.
«±ÀézÁzÀåAvÀ ºÀ®ªÁgÀÄ ºÉ¸ÀgÀÄUÀ¼À°è d£À¦æAiÀĪÁVgÀĪÀ PÁUÀzÀ PÀvÀÛj¸ÀĪÀ «²µÀÖ PÀ¯ÉAiÀiÁzÀ ¸ÁAf ¨sÁgÀwÃAiÀÄ ªÀÄÆ®zÉÝ DVzÉ. ¥ÀÅgÁt ¥ÀÅgÀĵÀ ²æà PÀȵÀÚ£ÉÆqÀ£É ¸ÀA§AzsÀ ¨É¸ÉzÀÄPÉÆArgÀĪÀ F PÀ¯É ºÀÄnÖPÉÆArzÉÝ PÀȵÀÚ¤UÁV J£À߯ÁUÀÄvÀÛzÉ. ²æÃPÀȵÀÚ£À ¨sÀPÀÛgÀÄ PÀȵÀÚ£À zsÁå£ÀzÀ°è ¨sÀQÛ¥ÀgÀªÀ±ÀgÁV DgÀA©ü¹zÀ PÀ¯ÉAiÉÄ ¸ÁAf PÀ¯É. zÉêÁ®AiÀÄUÀ¼À C®APÁgÀPÁÌV G¥ÀAiÉÆÃUÀªÁUÀÄwÛzÀÄÝzÀjAzÀ EzÀPÉÌ zÉêÀ¸ÁÜ£ÀPÀ¯Á ¸ÁAf JA§ ºÉ¸ÀgÀÆ EzÉ. ªÉÆzÀ¯É®è ¸Á«gÁgÀÄ ¸ÁAf PÀ¯Á«zÀgÀÄ F PÀ¯ÉAiÀÄ£ÀÄß JvÀÛgÀPÉÌ PÉÆAqÉƬÄÝzÀÝgÀÄ. DzÀgÉ EwÛÃa£À ¢£ÀUÀ¼À°è F PÀ¯É vÉgÉAiÀÄ ªÀÄgÉUÉ ¸ÀjzÀÄ d£ÀgÀ PÀtÂÚAzÀ PÀtägÉAiÀiÁUÀÄwÛzÉ. EAvÀºÀ C¥ÀgÀÆ¥ÀzÀ PÀ¯ÉAiÀÄ£ÀÄß ªÀÄvÉÛ ¨É¼ÀQUÉ vÀAzÀÄ d£À¦æAiÀÄUÉƽ¸ÀĪÀ PÉ®¸ÀªÀ£ÀÄß zÉñÀzÀ ºÀ®ªÁgÀÄ PÀ¯Á«zÀgÀÄ £ÀqɸÀÄwÛzÁÝgÉ. CAvÀºÀªÀgÀ°è PÀ£ÁðlPÀzÀ PÀ¯Á«zÀ ªÉÄʸÀÆgÀÄ ºÀĸÉä ¸ÀºÁ M§âgÀÄ. FUÁUÀ¯É vÀªÀÄä KPÁgÉÃSÁ avÀæ ºÁUÀÆ ºÀ®ªÀÅ §UÉAiÀÄ ¥ÉÃ¥Àgï Dmïð ªÀÄvÀÄÛ ¥ÉÃ¥Àgï PÁæ¥sóïÖ ªÀÄÆ®PÀ vÀªÀÄä£ÀÄß ©ü£ÀߪÁV UÀÄgÀÄw¹PÉÆArgÀĪÀ ºÀĸÉä PÀ£ÁðlPÀzÁzÀåAvÀ ¸ÁAfAiÀÄ d£À¦æAiÀÄvÉUÁV PÀ¯Á¥ÀæzÀ±Àð£À £ÀqɸÀÄwÛzÁÝgÉ.


Sanjhi Mask Camp in Balkaje (Sullia, Dakshina Kannada)


Sanjhi Mask Camp in Balkaje (Sullia, Dakshina Kannada)


¥Àæ¸ÀÄÛvÀ CªÀgÀÄ ¸ÁAf ªÀiÁzÀjAiÀÄ°è ºÀ®ªÀÅ §UÉAiÀÄ ªÀÄÄRªÁqÀUÀ¼À£ÀÄß E°è ¥ÀæzÀ±Àð£ÀPÉÌ EqÀ°zÁÝgÉ. ºÀ®ªÀÅ §UÉAiÀÄ°è «²µÀÖ J¤ß¸À°gÀĪÀ F ¥ÀæzÀ±Àð£ÀPÉÌ §gÀ°gÀĪÀ D¸ÀPÀÛjUÉ ¸ÁAfAiÀÄ ©ü£Àß ªÀÄÄRUÀ¼À C£ÁªÀgÀtzÀ eÉÆvÉAiÀįÉè vÁªÀÇ PÀ¯Á«zÀgÁV ¥Á¯ÉÆμÀÄîªÀ C¥ÀgÀÆ¥ÀzÀ CªÀPÁ±À zÉÆgÀPÀ°zÉ. ¥ÀæzÀ±Àð£ÀzÀ ¸ÀªÀÄAiÀÄzÀ°è ºÀĸÉäAiÀĪÀgÀÄ ¸ÁAf ªÀiÁzÀjUÀ¼À£ÀÄß vÀAiÀiÁj¸ÀĪÀ ¥ÁævÀåQëPÉ ¤ÃqÀ°zÁÝgÉ. £ÀAvÀgÀ vÁªÉ ¸ÁAf PÀ¯ÁPÀÈwAiÀÄ£ÀÄß vÀAiÀiÁj¸ÀĪÀ CªÀPÁ±À «ÃPÀëPÀjUÉ ¹PÀÌ°zÉ. D¸ÀPÀÛgÀÄ vÁªÉ ¸ÁAfAiÀÄ£ÀÄß PÀvÀÛj¸ÀĪÀ ªÀÄÆ®PÀ PÁAiÀÄðPÀæªÀÄzÀ°è M¼ÀUÉƼÀÄîªÀ ºÁUÀÆ D ªÀÄÆ®PÀ ¸ÁAfAiÀÄ£ÀÄß CjvÀÄPÉƼÀÄîªÀ CªÀPÁ±À ®¨sÀåªÁUÀ°zÉ.
¸ÁªÀiÁ£ÀåªÁV avÀæPÀ¯Á ¥ÀæzÀ±Àð£ÀªÉAzÀgÉ PÀ¯Á«zÀ£À PÀ¯ÁPÀÈwUÀ¼À ¥ÀæzÀ±Àð£À ªÀiÁvÀæ EgÀÄvÀÛzÉ. E°è CzÀPÉÌ ©ü£ÀߪÁV D¸ÀPÀÛ «ÃPÀëPÀgÀ£ÀÄß PÀ¯ÉAiÉƼÀUÉ §gÀªÀiÁrPÉƼÀÄîªÀ, CªÀgÀ ªÀÄÆ®PÀªÉ PÀ¯ÁPÀÈw ¸ÀȶָÀĪÀ ºÁUÀÆ D ªÀÄÆ®PÀ ¸ÁAfAiÀÄ£ÀÄß CjvÀÄPÉƼÀÄîªÀ CªÀPÁ±À ®¨sÀåªÁUÀ°zÉ. §ºÀıÀºÀ «ÃPÀëPÀgÉ PÀ¯Á«zÀgÁV©qÀĪÀ F ªÀiÁzÀjAiÀÄ avÀæ¥ÀæzÀ±Àð£À PÀ¯Á¸ÀPÀÛjUÉ ºÉƸÀ C£ÀĨsÀªÀªÀªÀ£ÀÄß ¤ÃqÀ§ºÀÄzÀÄ.










Sanjhi Mask Camp in Balkaje (Sullia, Dakshina Kannada)


Sanjhi Mask Camp in Balkaje (Sullia, Dakshina Kannada)



Sanjhi Mask Camp in Balkaje (Sullia, Dakshina Kannada)


Sanjhi Mask Camp in Balkaje (Sullia, Dakshina Kannada)









S F Huseni Mysore

S F Huseni Mysore

S F Huseni Mysore

S F Huseni Mysore

S F Huseni Mysore

S F Huseni Mysore

S F Huseni Mysore

S F Huseni Mysore

S F Huseni Mysore













S.F.HUSENI


ಪೇಪರ್ ರಿಲೀಫ್ ಭಿತ್ತಿಚಿತ್ರಗಳು S.F.Huseni


ಪೇಪರ್ ರಿಲೀಫ್ ಭಿತ್ತಿಚಿತ್ರಗಳು


ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಒಂದು ಚಿತ್ರಕಲಾ ಪ್ರದರ್ಶನ. ಅಲ್ಲಿ “ಆಕ್ಸಿಡೆಂಟ್” ಹೆಸರಿನಲ್ಲಿ ಹಲವು ಕಲಾಕೃತಿಗಳ ಸರಣಿ ಪ್ರದರ್ಶನ ನಡೆಯುತ್ತಿತ್ತು. ರಸ್ತೆಯೊಂದರಲ್ಲಿ ನಡೆದ ಆಕ್ಸಿಡೆಂಟ್‌ನ ಯಥಾವಥ್ ಚಿತ್ರಣದಂತಿದ್ದ ಅದು ರಕ್ತಸಿಕ್ತವಾಗಿ ನೋಡಲು ಭಯ ಹುಟಿಸುವಂತಿತ್ತು. ಅದನ್ನು ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಚೀರಿಕೊಳ್ಳುತ್ತಾ ಅಲ್ಲಿಂದ ದೂರ ಓಡಿಹೋದರು. ಆಕ್ರಮಣಕಾರಿ ನೆಲೆಯಲ್ಲಿ ರಚಿಸಿದ್ದ ಆ ಕಲಾಕೃತಿ ಬೀರಿದ ಪರಿಣಾಮ ಅದು! ಅಂದರೆ ಆ ಕಲಾಕೃತಿ ಸಹಜತೆಗೆ ಹತ್ತಿರವಾಗಿತ್ತು!.
ಅಲ್ಲಿ ನಡೆಯುತ್ತಿದ್ದುದು ‘ಪೇಪರ್ ಮೋಲ್ಡ್ ರಿಲೀಫ್’ ಅಥವಾ ‘ಪೇಪರ್ ರಿಲೀಫ್’ ಮಾಧ್ಯಮದ ಕಲಾಕೃತಿಗಳ ಪ್ರದರ್ಶನ. ಹಳೆಯ ಪತ್ರಿಕೆಗಳ ನಿರುಪಯೋಗಿ ಕಾಗದವೆ ಆ ಕಲಾಕೃತಿಗಳ ಜೀವಾಳ. ಹಳೆಯ ಕಾಗದವನ್ನೆ ಉಪಯೋಗಿಸಿಕೊಂಡು ತ್ರಿ ಆಯಾಮದ ಉಬ್ಬು ಆಕೃತಿಯನ್ನು ರೂಪಿಸಿ ಅದಕ್ಕೆ ಎನಾಮೆಲ್ ಬಣ್ಣ ಹಚ್ಚಿ ಒಣಗಿಸಿದರೆ ಅದನ್ನು ಕಾಗದದ ಕಲಾಕೃತಿ ಎನ್ನಲು ಸಾಧ್ಯವೇ ಇಲ್ಲ. ಲೋಹ ಮಾಧ್ಯಮದಲ್ಲಿ ತಯಾರಿಸಿದ ಉಬ್ಬುಚಿತ್ರದ ಕಲಾಕೃತಿಯಂತೆಯೇ ಕಂಗೊಳಿಸುತ್ತದೆ ಅದು. ಎನಾಮೆಲ್ ಪೈಂಟ್ ಬದಲಾಗಿ ಟೆರ್ರಾಕೋಟಾ ಬಣ್ಣ ಹಚ್ಚಿದರೆ ಮಣ್ಣಿನ ಕಲಾಕೃತಿಯಂತೆ ಕಾಣಿಸುತ್ತದೆ. ಕಲಾವಿದರ ಅಭಿರುಚಿ, ಆಸಕ್ತಿ ಮತ್ತು ಕೌಶಲ್ಯಕ್ಕೆ ತಕ್ಕಂತೆ ವೈವಿಧ್ಯಮಯವಾದ ಆಕೃತಿಗಳನ್ನು ತಯಾರಿಸುವ ಅವಕಾಶಗಳು ಈ ಮಾಧ್ಯಮದಲ್ಲಿದೆ.
ಪೇಪರ್ ಕ್ರಾಫ್ಟ್ನಲ್ಲಿ ಅಭಿವ್ಯಕ್ತಿಗಾಗಿ ಹಲವು ವಿಧಾನಗಳಿವೆ. ಹರಿತವಾದ ಚಾಕು ಮತ್ತು ಕತ್ತರಿಯಿಂದ ಸೂಕ್ಷ್ಮ ಮತ್ತು ಸಂಕೀರ್ಣವಾದ ವಿನ್ಯಾಸಗಳನ್ನು ಕತ್ತರಿಸುವ “ಸಾಂಝಿ” ಮತ್ತು “ಕರಿಗಾಮಿ” ಕಲೆ, ಮುಖವಾಡಗಳನ್ನು ತಯಾರಿಸುವ “ಮಾಸ್ಕ್ ಕ್ರಾಫ್ಟ್”, ದಪ್ಪ ಕಾಗದವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಮಡಿಸುವ ಮೂಲಕ ರೂಪಿಸುವ “ಪಾಪ್-ಅಪ್”, ಜ್ಯಾಮಿತೀಯ ಆಕಾರಗಳ ರೇಖಾ ಚಿತ್ರವನ್ನು ತಯಾರಿಸಿಕೊಂಡು ಕತ್ತರಿಸಿದ ಕಾಗದಗಳನ್ನು ಅಂಟಿಸಿ ವಿನ್ಯಾಸಗಳನ್ನು ರಚಿಸುವ “ಹೈ ರಿಲೀಫ್ ಕ್ರಾಫ್ಟ್” ಮತ್ತು ಯಾವುದಾದರೂ ಆಕಾರದ ಮೇಲೆ ಅಥವಾ ನಮಗೆ ಬೇಕಾದ ಆಕಾರಗಳನ್ನು (ಮಣ್ಣಿನ ಮಾಧ್ಯಮದಲ್ಲಿ) ತಯಾರಿಸಿಕೊಂಡು ಅದರ ಮೇಲೆ ಕಾಗದದ ತುಂಡುಗಳನ್ನು ಹಲವು ಪದರಗಳಲ್ಲಿ ಅಂಟಿಸಿ ತ್ರಿ ಆಯಾಮದ ಆಕಾರ ಮೂಡಿಸುವ “ಪೇಪರ್ ರಿಲೀಫ್” ಹೀಗೆ ಹಲಾವಾರು ಕ್ರಮಗಳಿವೆ. ಪ್ರಸ್ತುತ ಇಲ್ಲಿ ವಿವರಿಸಿರುವ ಕಲಾಕೃತಿಗಳು ತುಂಡು ಕಾಗದಗಳನ್ನು ಪದರ ಪದರಗಳಲ್ಲಿ ಅಂಟಿಸಿ ಮಾಡುವ  ಪೇಪರ್ ರಿಲೀಫ್ ಮಾದರಿಯಲ್ಲಿವೆ.  ಈ ಪೇಪರ್ ರಿಲೀಫ್ ಕ್ರಾಫ್ಟ್ ವಿಧಾನವು ಹಲವಾರು ವೈವಿಧ್ಯತೆಯನ್ನೂ ಅಪಾರ ಹರಹನ್ನೂ ಹಾಗೂ ವಿಭಿನ್ನ ಸಾಧ್ಯತೆಗಳನ್ನೂ ಹೊಂದಿರುವ ಕಲಾಮಾಧ್ಯಮ. ಅದರಲ್ಲಿ ಯಾವರೀತಿಯ ವಿನ್ಯಾಸಗಳನ್ನು ಬೇಕಾದರೂ ಮೂಡಿಸಬಹುದು. ಯಾವುದೇ ಭಾವನೆಗಳನ್ನೂ ಬೇಕಾದರೂ ಹೊರಹೊಮ್ಮಿಸಬಹುದು. ಕಲಾವಿದರಿಂದ ಕಲಾವಿದರಿಗೆ ಹೋಗುವಾಗ ಅದು ಅವರವರ ಅಭಿರುಚಿಗನುಗುಣವಾಗಿ ಪರಿವರ್ತಿತವಾಗುತ್ತಲೇ ಇರುತ್ತದೆ. ಹಾಗಾಗೆ ಅದನ್ನು “ಪರಿವರ್ತನಶೀಲ ಕಲೆ” (Varsatile craft) ಎನ್ನುತ್ತಾರೆ.
ರಿಲೀಫ್ ಕಲಾಕೃತಿ ಎಂದರೆ ‘ಸಮತಲದ ಹಿನ್ನೆಲೆಯ ಮೇಲೆ ರಚಿಸಿದ ಉಬ್ಬುಚಿತ್ರ’ ಎಂದರ್ಥ. ದಪ್ಪನಾದ ಶಿಲೆಯನ್ನು ಚೂಪಾದ ಸಾಧನಗಳಿಂದ ಕೊರೆಯುತ್ತಾ ನಿರ್ಮಿಸಿದ ಸಾವಿರಾರು ಕಲ್ಲಿನ ಕಲಾಕೃತಿಗಳನ್ನು ನಮ್ಮ ಪ್ರಾಚೀನ ದೇವಾಲಯಗಳಲ್ಲಿ ನಾವು ನೋಡಬಹುದು. ಚಪ್ಪಟೆಯಾದ ಹಿನ್ನೆಲೆಯ ಮೇಲೆದ್ದು ನಿಂತಂತೆ ಭಾಸವಾಗುವ ಅಂತಹ ಆಕೃತಿಗಳು ನೋಡುಗರಿಗೆ ತ್ರಿ ಆಯಾಮದ ದೃಶ್ಯವನ್ನು ಒದಗಿಸುತ್ತವೆ. ಆಧುನಿಕ ಕಲಾವಿದರು ಈ ರೀತಿಯ ಕಲಾಕೃತಿಗಳಿಗೆ ಶಿಲೆಯ ಬದಲಾಗಿ ಲೋಹವನ್ನು ಉಪಯೋಗಿಸುತ್ತಾರೆ. ಬೇಕಾದ ಆಕಾರದ ಮೋಲ್ಡ್‌ನ್ನು ತಯಾರಿಸಿಕೊಂಡು ಕರಗಿಸಿದ ಲೋಹದಿಂದ ಅಚ್ಚು ತೆಗೆಯುವುದು ಅಥವಾ ಲೋಹದ ಹಾಳೆಯ ಮೇಲೆ ಉಬ್ಬುಚಿತ್ರ ರಚಿಸುವುದು ರೂಢಿಯಲ್ಲಿದೆ. ಈ ರೀತಿಯ ಉಬ್ಬುಚಿತ್ರಗಳಲ್ಲಿ ಮಾನವ, ಪಶು-ಪಕ್ಷಿ, ಗಿಡಮರ ಹೀಗೆ ಯಾವುದಾದರೂ ವಿಷಯದ ಮೇಲೆ ಪರಿಣಾಮಕಾರಿ ಚಿತ್ರಗಳನ್ನು ತಯಾರಿಸಬಹುದು. ಪೇಪರ್ ರಿಲೀಫ್ ಸಹಾ ಅಂತಹುದೇ ಒಂದು ಉಬ್ಬುಶಿಲ್ಪದ ಮಾದರಿ. ಕೆಲವು ಕಲಾವಿದರು ಸಿದ್ಧಗೊಳಿಸಿದ ಮೋಲ್ಡ್ ಮೇಲೆ ಪೇಪರ್ ಪಲ್ಪ್ ಲೇಪಿಸುವ ಸುಲಭವಾದ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಹಳೆಯ ಪೇಪರ್‌ಗಳ ತುಂಡುಗಳಿಂದ ತಯಾರಿಸುವ ರಿಲೀಫ್ ಕಲಾಕೃತಿಗಳು ಹೆಚ್ಚು ಹೆಚ್ಚು ಸೃಜನಶೀಲವಾಗಿದ್ದು ಕ್ರಿಯಾಶೀಲತೆಯನ್ನು ಉದ್ದೀಪನಗೊಳಿಸುವಂತಿರುತ್ತವೆ.
ಹೆಚ್ಚು ಹಣವನ್ನೇನೂ ಕೇಳದ, ಆದರೆ ಅಪಾರವಾದ ತಾಳ್ಮೆಯನ್ನೂ ಹಾಗೂ ಹೊಸಹೊಸ ಕಲ್ಪನೆಗಳನ್ನೂ ಬೇಡುವ ಈ ಕಲೆಗೆ ಇಂತಹುದೇ ವಿಷಯವಾಗಿರಬೇಕೆಂಬ ಕಡ್ಡಾಯವೇನೂ ಇಲ್ಲ. ಯಾವುದೇ ವಿಷಯದ ಮೇಲೆ ಸಹಾ ಕಲಾವಿದರು ತಮ್ಮ ಕಲ್ಪನೆಯನ್ನು ಹರಿಯಬಿಡಬಹುದು. ಮುಖ್ಯವಾಗಿ ಬೇಕಾಗಿರುವುದು ಒಂದು ಒಳ್ಳೆಯ ಭಾವಪೂರ್ಣವಾದ ಕಲ್ಪನೆ. ಅದಕ್ಕಾಗಿ ನಮ್ಮ ಕೈಯಳತೆಯಲ್ಲಿ ಸಿಕ್ಕುವ ಯಾವುದೇ ಆಕಾರವಾದರೂ ಆಗಬಹುದು. ಅಥವಾ ಕಲಾವಿದನ ಕಲ್ಪನೆಗೆ ತಕ್ಕಂತಹ ಒಂದು ಆಕಾರವನ್ನು ತಯಾರಿಸಿಕೊಳ್ಳಬಹುದು. ಈ ರೀತಿಯ ಕಲಾಕೃತಿ ರಚಿಸುವ ಕಲಾವಿದರು ತಮ್ಮ ಕಲ್ಪನೆಗನುಗುಣವಾಗಿ ಆವೆಮಣ್ಣಿನಿಂದ ಆಕಾರವನ್ನು ತಯಾರಿಸಿಕೊಂಡು ಅದರಮೇಲೆ ಕಾಗದದ ತುಂಡುಗಳನ್ನು ಹಚ್ಚಿ ಉಬ್ಬುತಗ್ಗುಗಳ ರಿಲೀಫ್ ರಚಿಸುತ್ತಾರೆ. ಈ ರೀತಿಯಲ್ಲಿ ಸಿದ್ಧಗೊಂಡ ಕಲಾಕೃತಿಗಳು ಗೋಡೆಯ ಮೇಲೆ ಅಲಂಕರಣಕ್ಕೆ ತೂಗುಹಾಕುವ ಭಿತ್ತಿಚಿತ್ರಗಳಾಗಿ ಉಪಯುಕ್ತವಾಗುವುದರಿಂದ ಉತ್ತಮ ಅಭಿವ್ಯಕ್ತಿಯುಳ್ಳ ಕಲಾಕೃತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸಹಾ ಇದೆ.
ವಿಧಾನ
ಬೇಕಾಗುವ ವಸ್ತುಗಳು. ಒಂದಷ್ಟು ಹಳೆಯ ನ್ಯೂಸ್‌ಪೇಪರ್, ಮೈದಾಹಿಟ್ಟಿನಿಂದ ಮಾಡಿದ ಅಂಟು, ಮೆಟಲ್ ಪೇಸ್ಟ್, ಬಣ್ಣ, ಒಂದಷ್ಟು ತಾಳ್ಮೆ, ಶ್ರದ್ಧೆ ಮತ್ತು ಕಲ್ಪನೆ.
ರಿಲೀಫ್ ಕಲಾಕೃತಿ ರಚಿಸುವ ಕಲಾವಿದರು ಅನುಸರಿಸುವ ಮಾರ್ಗ ಹೀಗಿದೆ.
ಮೊದಲಿಗೆ ಏನು ಮಾಡಬೇಕೆಂಬ ನಿರ್ಧಾರಕ್ಕೆ ಬಂದನಂತರ ಅದನ್ನು ಲೈನ್ ಸ್ಕೆಚ್ ಮೂಲಕ ಕಾಗದದ ಮೇಲೆ ಬಿಡಿಸಿಕೊಳ್ಳಬೇಕು. ಅದೇ ಆಕಾರವನ್ನು ಆವೆ ಮಣ್ಣಿನಲ್ಲಿ ರಚಿಸಿಕೊಳ್ಳಬೇಕು. ಈ ರೀತಿಯ ರಿಲೀಫ್ ಕಲಾಕೃತಿಗಳು ಗೋಡೆಯ ಮೇಲೆ ತೂಗುಹಾಕುವ ಭಿತ್ತಿಚಿತ್ರ (ಮ್ಯೂರಲ್)ಗಳಾಗಿ ಉಪಯೋಗಿಸಲ್ಪಡುವುದರಿಂದ ಸಾಮಾನ್ಯವಾಗಿ 1.5X2ಅಡಿ ಅಥವಾ 2X3.5 ಅಡಿ ಅಳತೆಯಲ್ಲಿ (ಕೆಲವೊಮ್ಮೆ ಅದಕ್ಕೂ ವಿಶಾಲವಾಗಿ) ತಯಾರಿಸುತ್ತಾರೆ. ಬೇಕಾದ ಅಳತೆಯಲ್ಲಿ ತಯಾರಿಸಿದ ಮಣ್ಣಿನ ಆಕಾರದ ಮೇಲೆ ಅದು ಹಸಿಯಾಗಿದ್ದಾಗಲೇ ಮೊದಲ ಪದರದ ಕಾಗದದ ಚೂರುಗಳನ್ನು ಅಂಟಿಸಬೇಕು. ಎರಡನೆ ಪದರದಿಂದ ಮುಂದಕ್ಕೆ ಮೈದಾಹಿಟ್ಟಿನ ಅಂಟನ್ನು ಕಾಗದದ ತುಂಡಿಗೆ ಲೇಪಿಸಿ ಅಂಟಿಸಬೇಕು. ಹೀಗೆ ಕಾಗದದ ಚೂರುಗಳನ್ನು ಹಲವು ಪದರಗಳಾಗಿ ಅಂಟಿಸಿ ಸಾಕಷ್ಟು ದಪ್ಪನಾದ ಪದರವನ್ನು ರಚಿಸಿಕೊಂಡ ಮೇಲೆ ಕೊನೆಯದಾಗಿ ಬಿಳೀಕಾಗದದ ಪದರವನ್ನು ಅಂಟಿಸಬೇಕು. ನಂತರ ಅದನ್ನು ಮಣ್ಣಿನಿಂದ ಬಿಡಿಸಿಕೊಳ್ಳಬೇಕು. ಅದನ್ನು ಎರಡೂ ಬದಿಗಳಲ್ಲಿ ಒಣಗಿಸಿ ನಂತರ ಬೇಕಾದ ಬಣ್ಣವನ್ನು ಸ್ಪ್ರೇಯರ್ ಮೂಲಕ ಹಚ್ಚಿದರೆ ಆಕೃತಿ ಸಿದ್ಧವಾದಂತೆ.
ಕಲಾವಿದನಿಗೆ ‘ಅಬ್‌ಸ್ಟ್ರಾಕ್ಟ್’ (ಅಮೂರ್ತ) ಮಾದರಿಯಲ್ಲಿ ಆಕೃತಿ ರಚಿಸಬೇಕಿದ್ದರೆ ಕಾಗದದ ಮೇಲೆ ನೇರವಾಗಿ ಬಣ್ಣ ಹಚ್ಚಬಹುದು. ಆದರೆ ‘ರಿಯಲಿಸ್ಟಿಕ್’ ಕಲಾಕೃತಿಗಳನ್ನು ರಚಿಸುವುದಿದ್ದರೆ ಕಾಗದದಿಂದ ತಯಾರಿಸಿದ ಆಕೃತಿಯ ಮೇಲೆ ಒಂದು ಪದರ ದಪ್ಪನಾಗಿ ಮೆಟಲ್ ಪೇಸ್ಟ್ ಹಚ್ಚಬೇಕಾಗುತ್ತದೆ. ಮೆಟಲ್‌ಪೇಸ್ಟ್ ಹಚ್ಚುವುದರಿಂದ ಕಣ್ಣು, ರೆಪ್ಪೆ, ತುಟಿ ಮೊದಲಾದ ಸೂಕ್ಷ್ಮ ಭಾಗವನ್ನು ಬೇಕಾದಂತೆ ತಿದ್ದಿ ತೀಡಿ ಮುಖದ ಭಾವನೆಗಳನ್ನು ನಿಖರಗೊಳಿಸಬಹುದು. ಬೇಕಾದ ರೀತಿಯಲ್ಲಿ ಕುಸುರಿಕೆಲಸ ಮಾಡಿ ಅಂದವನ್ನು ಹೆಚ್ಚಿಸಬಹುದು. ಮೆಟಲ್ ಪೇಸ್ಟ್ ಒಣಗಿದ ನಂತರ ನೆರಳು-ಬೆಳಕಿನ ಸಂಯೋಜನೆಯ ಮೂಲಕ ವಿಶಿಷ್ಟ ಅರ್ಥವನ್ನು ಹೊಮ್ಮಿಸುವಂತಹ ಎನಾಮೆಲ್ ಬಣ್ಣವನ್ನು ಸ್ಪ್ರೇ ಮಾಡಿದರೆ ಸುಂದರವಾದೊಂದು ಭಿತ್ತಿಚಿತ್ರ ತಯಾರಾಗುತ್ತದೆ. ಪೇಪರ್ ಪಲ್ಪ್‌ನಿಂದ ಕಲಾಕೃತಿ ಮಾಡುವುದಕ್ಕಿಂತ ಈ ವಿಧಾನದಲ್ಲಿ ಸ್ವಲ್ಪ ಶ್ರಮ ಹೆಚ್ಚು. ಆದರೂ ಈ ವಿಧಾನದಲ್ಲಿ ಮುಕ್ತಾಯದ ಮೆರುಗು ಕೊಡುವಲ್ಲಿ ಅಪಾರವಾದ ಸಾಧ್ಯತೆಗಳಿವೆ. ಪೇಪರ್ ಪಲ್ಪ್ ಅಗಲೀ ಕಾಗದದ ತುಂಡುಗಳಿಂದಾಗಲಿ ತಯಾರಿಸಿದ ಕಲಾಕೃತಿಯು ನಿರೀಕ್ಷೆಯ ಸುಮಾರು ಶೇ.70ರಷ್ಟು ಮಾತ್ರ ಸಿದ್ಧವಾಗಿರುತ್ತದೆ. ಉಳಿದುದನ್ನು ನಂತರದ ಕುಸುರಿಕೆಲಸಗಳಿಂದಲೂ ಮತ್ತು ವರ್ಣಸಂಯೋಜನೆಯಿಂದಲೂ ಪೂರ್ಣಗೊಳಿಸಬೇಕಾಗುತ್ತದೆ.
ಮಕ್ಕಳ ಮನರಂಜನೆ ಮತ್ತು ಮನೋವಿಕಾಸಕ್ಕಾಗಿ ಪಠ್ಯೇತರ ಚಟುವಟಿಕೆಯಾಗಿ ನಮ್ಮ ಶಾಲೆಗಳಲ್ಲಿ ಕ್ರಾಫ್ಟ್ ತರಗತಿಗಳೇನೋ ಇರುತ್ತವೆ. ಆದರೆ ಬಲೂನ್‌ಗಳ ಮೇಲೆ ಪೇಪರ್ ತುಂಡುಗಳನ್ನು ಹಚ್ಚಿ ಮಾಸ್ಕ್‌ಗಳನ್ನು ಮಾಡಿಸುವಷ್ಟಕ್ಕೆ ಕ್ರಾಫ್ಟ್ ತರಗತಿಗಳನ್ನು ಸೀಮಿತಗೊಳಿಸಲಾಗುತ್ತದೆ. ಅದರದ್ದೇ ಮುಂದುವರೆದ ಭಾಗವಾದ ಪೇಪರ್ ರಿಲೀಫ್ ವರ್ಕ್ ಅನ್ನು ಮಕ್ಕಳಿಂದ ಮಾಡಿಸುವುದರಿಂದ ಅವರಲ್ಲಿ ಕ್ರಿಯಾಶೀಲತೆಯನ್ನೂ ಸೃಜನಶೀಲತೆಯನ್ನೂ ಕುಶಲತೆಯನ್ನೂ ಉದ್ದೀಪನಗೊಳಿಸಬಹುದಾಗಿದೆ. ನಮ್ಮಲ್ಲಿನ ಕೆಲವು ಕಲಾವಿದರು ವೈಯುಕ್ತಿಕ ನೆಲೆಯಲ್ಲಿ ಶಾಲಾಮಕ್ಕಳಿಗೆ ಪೇಪರ್ ರಿಲೀಫ್ ಕಾರ್ಯಾಗಾರಗಳನ್ನು ನಡೆಸಿದಾಗ ಮಕ್ಕಳು ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಂತಸಪಟ್ಟಿರುವುದು ಕಂಡುಬಂದಿದೆ. ಮಕ್ಕಳಲ್ಲಿ ಹಲವು ವಿನ್ಯಾಸಗಳ ಬಗೆಗೆ ಆಸಕ್ತಿ ಕೆರಳಿಸಿ ಅವರ ಅರಿವನ್ನು ವಿಸ್ತರಿಸಿ ಮನೋವಿಕಾಸಕ್ಕೆ ಕಾರಣವಾಗುವುದರಿಂದ ವಿದೇಶಗಳಲ್ಲಿ ಹಲವಾರು ರೀತಿಯ ಪೇಪರ್ ರಿಲೀಫ್ ತರಗತಿಗಳನ್ನು ಮಕ್ಕಳಿಗಾಗಿ ನಡೆಸುತ್ತಾರೆ. ಪ್ರಾಥಮಿಕ ಹಂತದ, ಮಾಧ್ಯಮಿಕಹಂತದ ಮತ್ತು ಕಾಲೇಜ್ ಹಂತದ ಮಕ್ಕಳ ಮನೋಸ್ಥಿತಿಗೆ ಹೊಂದುವಂತಹ ಬೆರೆಬೇರೆ ಪಠ್ಯಕ್ರಮಗಳನ್ನು ತಯಾರಿಸಿರುತ್ತಾರೆ. (ಅದರ ಫೇಸು ಸಹಾ ನೂರಾರು ಡಾಲರ್‌ಗಳಲ್ಲಿರುತ್ತದೆ!) ಹಲವು ವಿನ್ಯಾಸಗಳ ಗುರುತಿಸುವಿಕೆ, ಸಂಯೋಜಿಸುವಿಕೆ, ಚರ್ಚೆ ಮತ್ತು ತಯಾರಿ ಇವುಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿರುತ್ತಾರೆ. ನಮ್ಮಲ್ಲೂ ಸಹಾ ಶಿಕ್ಷಣ ಕ್ಷೇತ್ರದ ತಜ್ಞರು ಈ ಬಗ್ಗೆ ಆಲೋಚಿಸಬೇಕಾಗಿದೆ.

By. keshava kudla

Monday 6 February 2012

ದೇವಸ್ಥಾನಕಲಾ ಸಾಂಝಿ – ಸೃಜನಶೀಲ, ಸಾಂಪ್ರದಾಯಿಕ ಕಲೆ


ದೇವಸ್ಥಾನಕಲಾ ಸಾಂಝಿ – ಸೃಜನಶೀಲ, ಸಾಂಪ್ರದಾಯಿಕ ಕಲೆ  S.F.Huseni


ಮಲೆನಾಡಿನ ನಡುವಿನ ಸಂಪ್ರದಾಯಸ್ಥ ಕುಟುಂಬವೊಂದರ ಮದುವೆ. ಆ ಮದುವೆಗೆ ದೂರದೂರುಗಳಿಂದ ಹಲವಾರು ಜನ ಬಂದಿದ್ದರು. ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯುತ್ತಿದ್ದ ಮದುವೆಯ ಕಾರ್ಯಕ್ರಮಗಳು ಅಲ್ಲಿ ಬಂದಿದ್ದ ನಗರ ಜೀವನದ ಆಧುನಿಕ ಮನಸ್ಸಿನ ಅತಿಥಿಗಳಿಗೆ ಮುದನೀಡುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ವರಮಹಾಶಯನ ಬಾಸಿಂಗದಲ್ಲಿದ್ದ ಬಣ್ಣದ ಕಾಗದಗಳ ಸಿಂಗಾರ ಮತ್ತು ಮದುವೆ ಮಂಟಪವನ್ನು ಅಲಂಕರಿಸಿದ್ದ ಹಲವಾರು ಸಾಂಪ್ರದಾಯಿಕ ವಿನ್ಯಾಸಗಳಲ್ಲಿ ಕತ್ತರಿಸಿದ್ದ ಬಣ್ಣಬಣ್ಣದ ಜರೀ ಕಾಗದಗಳು ಅವರೆಲ್ಲರ ಮನಸ್ಸನ್ನಪಹರಿಸಿದ್ದವು. ರಾತ್ರೆ ಮದುಮಕ್ಕಳಿಗೆ ಸಜ್ಜುಗೊಳಿಸಿದ್ದ ‘ಮಧುಮಂಚ’ದ ತುಂಬೆಲ್ಲಾ ಅಂಟಿಸಿದ್ದ ಥರಾವರಿಯಾಗಿ ಕತ್ತರಿಸಿದ್ದ ಬಣ್ಣಬಣ್ಣದ ಕಾಗದಗಳು ಹೂವು ಬಳ್ಳಿಗಳ ವಿನ್ಯಾಸಗಳು ಸಹಾ ನೋಡುಗರಿಗೆ ಅತ್ಯಾಕರ್ಷಕವಾಗಿ ಕಾಣುತ್ತಿದ್ದವು. ಅದನ್ನು ನೋಡಿದವರಿಗೆ ಬೇರೆಲ್ಲೂ ಕಾಣಸಿಗದ ಆ ಬಣ್ಣದ ಕಾಗದದ ಅಲಂಕಾರದ ಬಗೆಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಅವರೆಲ್ಲರನ್ನು ಆಕರ್ಷಿಸಿದ ಅದು “ಸಾಂಝಿ ಕಲೆ”. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಲೆಂದೇ ಹುಟ್ಟಿಕೊಂಡ ಕಳೆದ ಹತ್ತಾರು ಶತಮಾನಗಳಿಂದಲೂ ಭಾರತದಲ್ಲಿ ರೂಢಿಯಲ್ಲಿರುವ ಒಂದು ಜನಪದ ಕಲೆ. ಮದುವೆ ಮೊದಲಾದ ಕಾರ್ಯಕ್ರಮಗಳ ಅಲಂಕರಣದ ಉಪಯೋಗದಲ್ಲಷ್ಟೇ ಅಲ್ಲದೆ ಭಕ್ತಿಮಾರ್ಗದಲ್ಲಿ ಹುಟ್ಟಿಕೊಂಡ ಕಾರಣ ದೇವಾಲಯಗಳ ಅಲಂಕಾರದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದ ಕಾರಣದಿಂದ ದೇವಸ್ಥಾನ ಕಲಾಸಾಂಝಿ ಎಂದೇ ಪ್ರಖ್ಯಾತವಾಗಿದ್ದ ಕಲೆ. ಅಥವಾ ಸರಳವಾಗಿ ಹೇಳಬೇಕೆಂದರೆ ಅದೊಂದು ರೀತಿಯ “ಪೇಪರ್ ಕಟಿಂಗ್ ಆರ್ಟ್”.
ಕಲಾವಿದನೊಬ್ಬ ತನ್ನ ಅಭಿವ್ಯಕ್ತಿಗಾಗಿ ಆಯ್ದುಕೊಳ್ಳುವ ಮಾಧ್ಯಮಗಳು ಹಲವಾರು. ತನ್ನ ಆಸಕ್ತಿ ಹಾಗೂ ತನ್ನೊಳಗೆ ಹುದುಗಿರುವ ಸೃಜನಶೀಲ ಮನಸ್ಸಿಗನುಗುಣವಾಗಿ ಓರ್ವ ಆಯ್ದುಕೊಳ್ಳುವ ಮಾಧ್ಯಮದಲ್ಲಿ ಆತ ತನ್ನ ಅಸಕ್ತಿಗನುಗುಣವಾಗಿ ಏನಾದರೂ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಕೆಲವು ಮಾಧ್ಯಮಗಳು ಕಲಾವಿದನೊಬ್ಬನ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸಲು ಅತ್ಯಂತ ಸೂಕ್ತ ಮಾಧ್ಯಮವಾಗಿರುತ್ತವೆ. ಅಂತಹ ಪ್ರಕಾರದಲ್ಲಿ “ಪೇಪರ್ ಕಟಿಂಗ್ ಕಲೆ” ಸಹಾ ಒಂದು. ನೋಡಲು ಅತ್ಯಂತ ಸುಲಭ ಎಂದೇ ಭಾಸವಾಗುವ ಅದರೆ ಅದನ್ನು ಕರಗತ ಮಾಡಿಕೊಂಡು ಪರಿಣಿತಿಗಳಿಸಲು ಅತ್ಯಂತ ಕಷ್ಟವಾಗಿರುವ ಕಲೆಯೇ ಪೇಪರ್ ಕಟಿಂಗ್ ಕಲೆ.
ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ‘ವಿಶ್ವದ ಅತ್ಯಂತ ಪ್ರಾಚೀನ ಜನಪದ ಕಲೆ’ ಎಂದು ಇದನ್ನು ವರ್ಣಿಸಲಾಗುತ್ತದೆ.  ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಇದರ ಹುಟ್ಟು ಆದದ್ದು ಚೀನಾದ ಜನಪದರಲ್ಲಿ ಎಂಬ ಒಂದು ಅಭಿಪ್ರಾಯವಿದೆ. ಇದನ್ನು ಚೀನಾದ ಅತೀ ಪ್ರಾಚೀನ ಹಾಗೂ ಅತೀ ಜನಪ್ರಿಯ ಹವ್ಯಾಸ ಎಂದೇ ಕರೆಯಲಾಗುತ್ತದೆ. ಕಾಗದವನ್ನು ಅನ್ವೇಷಿಸಿ ಜಗತ್ತಿಗೆ ಅದನ್ನು ಕೊಡುಗೆಯಾಗಿ ನೀಡಿದ ಚೀನೀಯರು ಸಹಜವಾಗೇ ಕಾಗದದ ಮೂಲಕ ವಿಶಿಷ್ಟ ಕಲೆಯೊಂದಕ್ಕೆ ಜನ್ಮ ನೀಡಿರಬಹುದು. ಚೀನಾದ ಜನ ಅದರಲ್ಲೂ ಅಲ್ಲಿನ ಮಹಿಳೆಯರು  ಈ ಕಲೆಯ ಉಗಮಕ್ಕೆ ಕಾರಣರು ಎನ್ನುತ್ತಾರೆ.
ಈ ಕಲೆಯ ಅಭಿವ್ಯಕ್ತಿ ಚೀನಾ ಜನಪದರಲ್ಲಿ ಹುಟ್ಟಿ ನಂತರ ಇತರ ಎಲ್ಲಾ ದೇಶಗಳಿಗೂ ಹರಡಿತೆಂದು ಹೇಳಲಾಗುತ್ತದಾದರೂ ಚೀನಾದ ಜೊತೆಜೊತೆಗೇ ಅಥವಾ ಅದಕ್ಕಿಂತಲೂ ಮೊದಲೇ ಈ ಕಲೆ ಭಾರತದಲ್ಲಿದ್ದಿರಬಹುದು ಎಂಬುದಕ್ಕೆ ಭಾರತೀಯ ಸಾಂಪ್ರದಾಯಿಕ ಅಚರಣೆಗಳನ್ನು ನೋಡಿದಾಗ ಹಲವಾರು ಉದಾಹರಣೆಗಳು ದೊರೆಯುತ್ತವೆ. ನಮ್ಮಲ್ಲಿ ಮದುವೆಯ ಸಂದರ್ಭಗಳಲ್ಲಿ ಗಂಡಿಗೆ ಕಟ್ಟುವ ಬಾಸಿಂಗದಲ್ಲಿ ಇಂತಹ ಸುಂದರ ವಿನ್ಯಾಸಗಳನ್ನು ಕಾಣಬಹುದು. ಆರಂಭದಲ್ಲಿ ಹೇಳಿದಂತೆ ಮಲೆನಾಡಿಗರ ಮದುವೆ ಸಮಯದಲ್ಲಿ ಮುಖ್ಯ ಅಲಂಕರಣ ಸಾಮಗ್ರಿಯಾಗಿ ಬಣ್ಣದ ಕಾಗದಗಳ ಕತ್ತರಿಸಿದ ವಿನ್ಯಾಸಗಳನ್ನೇ ಬಳಸಲಾಗುತ್ತದೆ. ಮದುವೆ ಮನೆಯ ಬಣ್ಣದ ಕಾಗದದ ಅಲಂಕಾರಕ್ಕೆಂದೇ ಪರಿಣಿತರಾದ ಕಲಾವಿದರಿದ್ದು ಮದುವೆ ಮನೆಯೊಂದರ ಅಲಂಕಾರಕ್ಕೆ ಐದಾರು ಸಾವಿರದವರೆಗೆ ಶುಲ್ಕ ವಸೂಲು ಮಾಡಿಕೊಳ್ಳುತ್ತಾರೆ. ಗೌರಿ ಹಬ್ಬದಂತಹ ಹಿಂದೂ ಹಬ್ಬಗಳಲ್ಲಿ ಮಹಿಳೆಯರು ಬಾಗಿನದ ವಿನಿಮಯ ಮಾಡಿಕೊಳ್ಳುವಾಗ ಬಾಗಿನದ ಮೊರಗಳನ್ನು ಮುಚ್ಚುವುದು ಬಣ್ಣದ ಕಾಗದಗಳಿಂದಲೆ. ಪೂಜೆಯಲ್ಲಿ ಉಪಯೋಗಿಸುವ ಹತ್ತಿಯಿಂದ ತಯಾರಿಸುವ “ಗೆಜ್ಜೆ-ವಸ್ತ್ರ”ಗಳನ್ನು ಅಲಂಕರಿಸುವುದೂ ಕತ್ತರಿಸಿದ ಬಣ್ಣದ ಕಾಗದದಿಂದಲೇ. ಬೀಜಾಪುರ ಬೀದರ್ ಗುಲ್ಬರ್ಗಾ ಕಡೆಯ ಮುಸ್ಲಿಂ ಕುಟುಂಬಗಳಲ್ಲಿ ಮದುವೆಯ ಸಮಯದಲ್ಲಿಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ಸಿಹಿ ಕಳಿಸುವ ಸಂಪ್ರದಾಯವಿದೆ. ಹಾಗೆ ಕಳಿಸುವ ಸಿಹಿ ತುಂಬಿದ ಬುಟ್ಟಿಯ ಮೇಲೆ ಹಲವು ವಿನ್ಯಾಸಗಳಲ್ಲಿ ಕತ್ತರಿಸಿದ ಕೆಂಪು ಮತ್ತು ಹಸಿರು ಬಣ್ಣದ ಕಾಗದ ಅಂಟಿಸಲಾಗುತ್ತದೆ. ಭಾರತದ ಅತೀ ಪ್ರಾಚೀನ ಕಲೆಯಾದ ರಂಗೋಲಿಗೆ ವಿನ್ಯಾಸಗಳನ್ನು ಮಾಡಿಕೊಳ್ಳುತ್ತಿದ್ದುದೇ ಸಾಂಝಿಯ ವಿನ್ಯಾಸಗಳ ಆಧಾರದಲ್ಲಿ. ಕಾಗದದ ವಿವಿದ ಮಡಿಕೆಗಳನ್ನು ಮಾಡಿ ಪ್ರಮಾಣಬದ್ಧವಾಗಿ ಕತ್ತರಿಸಿ ಅದನ್ನು ಬಿಡಿಸಿ ನೆಲದ ಮೇಲೆ ಹಾಸಿ ಅದರ ಮೇಲೆ ಬಣ್ಣಬಣ್ಣದ ರಂಗೋಲಿಯನ್ನು ಉದುರಿಸಿ ಕಾಗದವನ್ನು ನಿಧಾನಕ್ಕೆ ಮೇಲೆತ್ತಿದರೆ ಸುಂದರವಾದ ರಂಗೋಲಿಯ ವಿನ್ಯಾಸಗಳು ಗೋಚರಿಸುತ್ತವೆ. ದೇವಾಲಯಗಳಲ್ಲೂ ಇನ್ನಿತರ ಧಾರ್ಮಿಕ ಸಮಾರಂಭಗಳಲ್ಲೂ ದೊಡ್ದ ದೊಡ್ಡ ಪ್ರಮಾಣದಲ್ಲಿ ರಂಗೋಲಿ ಬಿಡಿಸಲು ಈ ಕಲೆ ಅತ್ಯಂತ ಸಹಕಾರಿಯಾಗಿರುತ್ತಿತ್ತು. ನಮ್ಮ ದೇಶದ ಹಿರಿಮೆಯನ್ನು ವಿಶ್ವದಾದ್ಯಂತ ಸಾರುತ್ತಿರುವ ದೇವಾಲಯಗಳಲ್ಲಿನ ಭಿತ್ತಿಗಳಲ್ಲಿನ ಸಮಸ್ವರೂಪದ ಜಾಲಂಧ್ರ, ಛಾವಣಿಯಲ್ಲಿರುವ ಭುವನೇಶ್ವರಿಗಳು ಮತ್ತಿತರ ಅಲಂಕರಣೆಯ ವಿನ್ಯಾಸಕ್ಕೆ ಸಹಾಯಕವಾಗಿದ್ದುದು ಸಾಂಝಿ ವಿನ್ಯಾಸಗಳೇ. ಇಂದಿಗೂ ಸಭೆ ಸಮಾರಂಭಗಳಲ್ಲಿ ಸ್ವಾಗತ ತೊರಣಗಳನ್ನೂ ಸಮಾರಂಭ ನಡೆಯುವ ಸ್ಥಳದ ಮೇಲ್ಭಾಗದ ಅಲಂಕರಣೆಯನ್ನೂ ಪೇಪರ್ ಕಟಿಂಗ್‌ಗಳಿಂದಲೇ ನಡೆಸುತ್ತಾರಷ್ಟೇ? ತಮಿಳುನಾಡು ಮತ್ತು ಕರ್ನಾಟಕದ ಭೂ ಪ್ರದೇಶಗಳು ಸೇರುವ ಭಾಗದ ಊರುಗಳಲ್ಲಿ ಮನೆ ಕಟ್ಟುವಾಗ ಗಾರೆ ಅಥವಾ ಸಿಮೆಂಟಿನ ಮೇಲೆ ಕಾವಿ ಬಣ್ಣದ ಚಿತ್ತಾರ ಮೂಡಿಸುವಾಗ ಉಪಯೋಗಿಸುವುದೂ ಸಹಾ ಈ ಮಾದರಿಯಲ್ಲಿ ಕತ್ತರಿಸಿದ ಕಾಗದವನ್ನೇ. ಇವುಗಳಲ್ಲಿ ಕೆಲವು ‘ಶುದ್ಧ ಸಾಂಝಿ’ ಆದರೆ ಮತ್ತೆ ಕೆಲವು ಅದರ ರೂಪಾಂತರಗಳಾಗಿರಬಹುದು. ಅಲ್ಲದೆ ಸಾಂಝಿಯ ಆರಂಭ ಪುರಾಣ ಪುರುಷ ಶ್ರೀಕೃಷ್ಣನ ಕಾಲದಷ್ಟು ಪುರಾತನ ಎಂಬುದು ಇತಿಹಾಸಕಾರರ ಅಭಿಪ್ರಾಯ. ನಮ್ಮ ದೇವಾಲಯ ಸಂಸ್ಕೃತಿ, ನಮ್ಮ ಜನಪದರ ರಂಗೋಲಿ, ಬಾಗಿನ ಕೊಡುವ ಪದ್ಧತಿ ಮತ್ತು ಮದುವೆಯ ಸಂಸ್ಕಾರಗಳು ಯಾವಾಗಿನಿಂದ ಭಾರತದಲ್ಲಿ ಇವೆಯೋ ಅಂದಿನಿಂದಲೂ ಈ ಕಲೆ ಭಾರತದಲ್ಲೂ ಇದೆ ಎಂದೇ ತಿಳಿಯಬಹುದು. ಹಾಗಿರುವಾಗ ನಮ್ಮದೇ ಮಣ್ಣಿನಲ್ಲಿ ಹುಟ್ಟಿಕೊಂಡು ಜನಪ್ರಿಯವಾಗಿದ್ದ ಈ ಕಲೆಗೆ ಬೇರೆ ದೇಶದಿಂದ ಆಮದಾದ ಕಲೆ ಎಂಬ ಪೊಳ್ಳು ಕಿರೀಟವಾದರೂ ಯಾಕೆ ಬೇಕು?
ಸಾಂಝಿಯ ಉಗಮ.
ಪೇಪರ್ ಕಟಿಂಗ್ ಕಲಾವಿದರು ಕಾಗದವನ್ನು ಚಕಚಕನೆ ಕತ್ತರಿಸುವುದನ್ನು ನೋಡುವುದೇ ಒಂದು ಅಪೂರ್ವ ಅನುಭವ.
ಮೊದಲ ಬಾರಿಗೆ ನಾನು ಪೇಪರ್ ಕಟಿಂಗ್ ಕೌಶಲ್ಯವನ್ನು ನೋಡಿದ್ದು ಪ್ರಾಥಮಿಕ ಶಾಲೆಯಲ್ಲಿದ್ದಾಗ. ನಮ್ಮ ಮುಖ್ಯೋಪಾಧ್ಯರು ಮಕ್ಕಳಿಗೆ ಹೊಸ ವಿಷಯಗಳ ಅರಿವಾಗಲಿ ಎಂಬ ಸದುದ್ದೇಶದಿಂದ ಆಗಾಗ ಯಕ್ಷಿಣಿಗಾರರನ್ನೋ ಕಲಾವಿದರನ್ನೋ ಕರೆಸಿ ಕಾರ್ಯಕ್ರಮ ಮಾಡಿಸುತ್ತಿದ್ದರು. ಹಾಗೆ ನಡೆದ ಪೇಪರ್ ಕಲಾವಿದರೊಬ್ಬರ ಒಂದು ಕಾರ್ಯಕ್ರಮದಲ್ಲಿ ಮೊದಲಬಾರಿಗೆ ಕಾಗದ ಕತ್ತರಿಸುವ ಕೈಗಳಲ್ಲಿನ ಕೌಶಲ್ಯವನ್ನು ಗಮನಿಸಿದ್ದೆ. ಆನಂತರ ಹೈಸ್ಕೂಲ್‌ನಲ್ಲಿದ್ದ ಡ್ರಾಯಿಂಗ್ ಮಾಸ್ಟರು ಆಗಾಗ ಕಾಗದ ಕತ್ತರಿಸುವ ಕಲೆಯನ್ನು ಪ್ರದರ್ಶಿಸುತ್ತಿದ್ದರು. ನಮ್ಮ ತಾಯಿ ಸಹಾ ದೇವರ ಪೂಜೆಗೆ ಹಬ್ಬಗಳ ಸಂದರ್ಭದಲ್ಲಿ ಮಾಡುತ್ತಿದ್ದ ಹತ್ತಿಯ ಹಾರಗಳಿಗೆ ಅಲಂಕಾರಿಕವಾಗಿ ಅಲ್ಯುಮಿನಿಯಂ ಫಾಯಿಲ್‌ನ ಬಣ್ಣಬಣ್ಣದ ತೆಳು ಹಾಳೆಗಳನ್ನು ಕತ್ತರಿಸಿ ಅಂಟಿಸಿ ಅದರ ಅಂದವನ್ನು ಹೆಚ್ಚಿಸುತ್ತಿದ್ದರು. ಮಲೆನಾಡಿನ ಕೆಲವು ಮದುವೆಗಳಲ್ಲಿ ಅಲಂಕಾರಕ್ಕೆ ಪೇಪರ್ ಕಟಿಂಗ್ ಉಪಯೋಗಿಸುವುದನ್ನೂ ನೋಡಿದ್ದೆ, ಕೊಳ್ಳೇಗಾಲ ತಾಳವಾಡಿ ಮೊದಲಾದ ಗಡಿನಾಡಿನ ಊರುಗಳಲ್ಲಿ ದೇವಾಲಯದ ಜೊತೆಗೆ ಹಳೆಕಾಲದ ಮನೆಗಳಲ್ಲೂ ಸಿಮೆಂಟ್ ಅಥವಾ ಗಾರೆಯ ಮೇಲೆ ಈ ಬಗೆಯ ವಿನ್ಯಾಸಗಳನ್ನು ನೋಡಿದ್ದೆ. ಆದರೆ ಆಗೆಲ್ಲ ಅದೊಂದು ವಿಶಿಷ್ಟವಾದ ಕಲಾ ಪ್ರಕಾರವೆಂದೂ ಭಾರತದ ಜನಪದದಲ್ಲೇ ಹುಟ್ಟಿಕೊಂಡ ಸೃಜನಶೀಲ ಕಲೆ ಎಂದೂ ಗೊತ್ತಿರಲಿಲ್ಲ. ನಿಧಾನಕ್ಕೆ ಕರ್ನಾಟಕದಲ್ಲಿ ಕ್ರಿಯಾಶೀಲರಾಗಿರುವ ಹಲವಾರು ಕಲಾವಿದರ ಪರಿಚಯವಾಗುತ್ತಿದ್ದಂತೆ ಅದರ ಆಳ ವಿಸ್ತಾರಗಳ ಅರಿವಾಗತೊಡಗಿತು.
ಸಾಂಝಿ’ ಪದದ ಹಿನ್ನೆಲೆಯಾದರೂ ಏನು?
ಈ ಪದಕ್ಕೆ ಅತ್ಯಂತ ಖಚಿತವಾದ ಮೂಲ ಇದ್ದಂತಿಲ್ಲ. ಅಲಂಕರಣ ಎಂಬರ್ಥದ ‘ಸಜಾವಟ್’ ಅಥವ ‘ಸಜ್ಜಾ’ ಎಂಬ ಪದ ಇದರ ಮೂಲವಿರಬಹುದು. ಕೆಲವರು ‘ಸಂಧ್ಯಾ’ ಎಂಬ ಸಂಸ್ಕೃತ ಪದವೇ ಇದರ ಮೂಲ ಪದ ಎನ್ನುತ್ತಾರೆ. ಹಿಂದಿಯ ‘ಸಾಂಜ್’ (ಸಾಯಂಕಾಲ) ಸಹಾ ಈ ಶಬ್ದದ ವ್ಯುತ್ಪತ್ತಿಗೆ ಕಾರಣ ಇರಬಹುದು. ಬಹಳ ಹಿಂದೆ ಇದು ಬೆಳೆದು ಬಂದ ಮಥುರಾ ಮತ್ತು ಬೃಂದಾವನದ ಭಾಗಗಳಲ್ಲಿ (ಮುಖ್ಯವಾಗಿ ಬೃಜಭಾಷೆ ಉಪಯೋಗದಲ್ಲಿದ್ದ ಭಾಗಗಳಲ್ಲಿ) ಸಂಜೆಯ ವೇಳೆಗೆ ದಂಪತಿಗಳು ಮನೆಯ ಬಾಗಿಲು ಅಥವಾ ಜಗಲಿಯಲ್ಲಿ ಕುಳಿತು ಪರಸ್ಪರ ಸಂಭಾಷಿಸುತ್ತ ರಚಿಸುತ್ತಿದ್ದ ಆಕೃತಿಗಳಂತೆ ಇವು.
ಸಾಂಝಿಯ ರಚನೆಯ ಆರಂಭದ ಕಾಲವನ್ನು ಪುರಾಣಗಳ ಕಾಲಕ್ಕೆ ಕೊಂಡೊಯ್ಯಲಾಗುತ್ತದೆ. ‘ಸಾಂಝಿಕಲೆಯ ಮೂಲವು ರಾಧಾಳಿಗೆ ಕೃಷ್ಣನ ಮೇಲಿದ್ದ ಮೋಹದಲ್ಲಿದೆ’ ಎನ್ನುತ್ತಾರೆ. ಕೃಷ್ಣನನ್ನು ಒಲಿಸಿಕೊಳ್ಳಲು ಕೃಷ್ಣನಿಗಾಗಿ ಕಾಯುತ್ತಿದ್ದ ರಾಧೆಯು ಪ್ರೇಮಪರವಶಳಾಗಿ ಮನೆಯ ಗೋಡೆಯ ಮೇಲೆಲ್ಲಾ ಹಲವಾರು ಚಿತ್ತಾರಗಳನ್ನು ಮಾಡುತ್ತಿದ್ದಳಂತೆ. ಅದನ್ನು ಅನುಸರಿಸಿದ ಇತರ ಗೋಪಿಕಾ ಸ್ತ್ರೀಯರೂ ಸಹಾ ಅವರವರ ಮನೆಯ ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುತ್ತಿದ್ದರಂತೆ. ನಂತರ ಆ ಹವ್ಯಾಸವು ಅದೇ ಚಿತ್ತಾರಗಳನ್ನು ಕಾಗದದಲ್ಲಿ ಕತ್ತರಿಸುವ ಮೂಲಕ ರೂಪಾಂತರಗೊಂಡಿತು. ಹಾಗೆ ಅಲ್ಲಿ ಹುಟ್ಟಿಕೊಂಡ ಈ ಕಲೆಯು ಹೆಚ್ಚು ಪ್ರಚಾರಕ್ಕೆ ಬಂದದ್ದು ಸಹಾ ಕೃಷ್ಣನಿಗೆ ಸಂಬಂಧಿಸಿದ ಮಥುರಾ ಮತ್ತು ಬೃಂದಾವನಗಳಲ್ಲೆ. ಇಂದಿಗೂ ಆ ಭಾಗದಲ್ಲೇ ಸಾಂಝಿ ಕಲಾವಿದರು ಹೆಚ್ಚಾಗಿದ್ದಾರೆ. ನಂತರದಲ್ಲಿ ಇದು ಜನಸಮೂಹದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿತು. ರಾಧಾ ಕೃಷ್ಣರ ಕಥಾ ರೂಪಕಗಳನ್ನು ಪ್ರಸ್ತುತಪಡಿಸಲು ಈ ಕಲೆಯ ಬಳಕೆಯಾಗುತ್ತಿತ್ತು. ‘ಸಾಂಝಿ ಎಂದರೆ ಕೃಷ್ಣನ ಕಥೆ’ ಎನ್ನುವಂತಾಗಿತ್ತು. ಮದುವೆಯಾಗದ ಹುಡುಗಿಯರು ಸಾಂಝಿಯನ್ನೆ ಆರಾಧಿಸುವ ಮೂಲಕ ಅದಕ್ಕೆ ದೈವತ್ವವನ್ನು ಕಲ್ಪಿಸಿದರು. ಸಾಂಝಿಯನ್ನೆ ಒಂದು ದೇವರನ್ನಾಗಿ ಪರಿಕಲ್ಪಿಸಿಕೊಂಡು ಗೋಡೆಯ ಮೇಲೆ ಸಾಂಝಿ ದೇವತೆಯ ಚಿತ್ರ ಬಿಡಿಸಿ ಅದನ್ನು ಆರಾಧಿಸುವ ಕ್ರಮವೂ ಕೆಲವೆಡೆ ರೂಢಿಯಲ್ಲಿತ್ತು. ಈ ಕಾರಣಗಳಿಂದ ‘ಸಾಂಝಿ’ ಎಂದರೆ ಅದು ಭಕ್ತಿಮಾರ್ಗದ ಆಚರಣೆಗಳಲ್ಲೊಂದಾಯಿತು. ದೇವಾಲಯಗಳ ಅಲಂಕರಣೆಗೂ ಸಾಂಝಿ ವಿನ್ಯಾಸಗಳು ಬಳಕೆಗೆ ಬಂದವು. ದೇವಾಲಯದ ವಿಶಾಲವಾದ ಅಂಗಳದಲ್ಲಿ ದೊಡ್ಡದೊಡ್ಡ ರಂಗೋಲಿ ಹಾಕುವಾಗ ದೇವತೆಗಳ (ಮುಖ್ಯವಾಗಿ ಕೃಷ್ಣನ ಲೀಲೆಗಳ) ಸುಂದರ ವಿನ್ಯಾಸದ ಸಾಂಝಿಯನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅದರೊಳಗೆ ಬಣ್ಣದ ಪುಡಿಯನ್ನು ತುಂಬಿಸಿದರೆ ಅದ್ಭುತವಾದ ನಯನ ಮನೋಹರ ರಂಗೋಲಿ ಕಂಗೊಳಿಸುತ್ತಿತ್ತು. ಹಾಗೆ ರಂಗೋಲಿಯನ್ನು ತಯಾರಿಸಲು ಹಿಡಿಯುವ ನಾಲ್ಕಾರು ಘಂಟೆಗಳ ಕಾಲ ಮಹಿಳೆಯರು ಭಕ್ತಿಗೀತೆಯನ್ನು ಹಾಡುತ್ತಾ ಭಗವಂತನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಹೀಗೆ ದೇವಾಲಯಗಳಲ್ಲಿ (ವಿಶೇಷವಾಗಿ ಉತ್ತರ ಭಾರತದ ದೇವಾಲಯಗಳ ಕಾರ್ಯಕ್ರಮಗಳಲ್ಲಿ) ಹೆಚ್ಚಾಗಿ ಬಳಕೆಯಾಗುತ್ತಿದ್ದುದರಿಂದ ಇದು “ದೇವಸ್ಥಾನಕಲಾ ಸಾಂಝಿ” ಎಂದೇ ಪ್ರಸಿದ್ಧವಾಯಿತು. ಪುರಿ ಜಗನ್ನಾಥ ದೇವಾಲಯದ ಉತ್ಸವದ ಸಮಯದಲ್ಲಿ ಇಂದಿಗೂ ಊರಲ್ಲೆಲ್ಲಾ ರಂಗೋಲಿ ಹಾಕುವಾಗ ಉಪಯೋಗಿಸುವುದು ಸಾಂಝಿ ವಿನ್ಯಾಸಗಳನ್ನೇ. ವಿಶೇಷ ಸಂದರ್ಭಗಳಲ್ಲಿ ರಚಿಸುವ ಸಾಂಝಿ ರಂಗೋಲಿಯ ಅಳತೆ ಕೆಲವೊಮ್ಮೆ 10-12 ಅಡಿಗಳಷ್ಟು ವಿಸ್ತಾರದಲ್ಲಿರುತ್ತದೆ. ವೃತ್ತಾಕಾರ, ಆಯತಾಕಾರ ಅಥವ ಚೌಕಾಕಾರದಲ್ಲಿರುವ ರಂಗೋಲಿಗೆ ಅಂಚಿನಲ್ಲಿ ಹೂವಿನ ಅಲಂಕಾರವಿದ್ದು ಅದರೊಳಗೆ ಕೃಷ್ಣನ ರಾಸಲೀಲೆಯ ಹಲವಾರು ದೃಷ್ಯಾವಳಿಗಳಿರುತ್ತವೆ. ಉತ್ತರಪ್ರದೇಶದಲ್ಲಿ ಒಂದು ತಿಂಗಳು ನಡೆಯುವ ‘ಬೃಜ್ ಯಾತ್ರಾ’ ಸಮಯದಲ್ಲಿ ಪೂಜೆಯ ಮುಖ್ಯ ಪರಿಕರ ಸಾಂಝಿ ರಂಗೋಲಿಯೇ. ಹರಿದ್ವಾರ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಂಝಿ ವಿನ್ಯಾಸ ಕತ್ತರಿಸುವ ಹಲವಾರು ಕುಟುಂಬಗಳಿದ್ದು ಅವರು ವಾಸವಾಗಿರುವ ಬೀದಿಗೆ “ಸಾಂಝಿ ಬೀದಿ” ಎಂಬ ಹೆಸರಿದೆ.
ಭಾರತದಲ್ಲೂ ವಿದೇಶಗಳಲ್ಲೂ ಹಲವಾರು ಹೆಸರುಗಳಲ್ಲಿ ಪ್ರಚಲಿತವಿರುವ ಈ ಪೇಪರ್ ಕಟಿಂಗ್ ಕಲೆಯಲ್ಲಿ ಹಲವಾರು ವ್ಯತ್ಯಾಸಗಳಿವೆ. ಚೀನಾ ಜಪಾನ್‌ಗಳಲ್ಲಿ ಪ್ರಚಲಿತವಿರುವ ಕಿರಿಗಾಮಿಯಲ್ಲಿ ಕಾಗದವನ್ನು ಒಂದಕ್ಕಿಂತ ಹೆಚ್ಚು ಬಾರಿ ಮಡಿಚಿ ನಂತರ ಕತ್ತರಿಸುವುದರಿಂದ ಸಮಸ್ವರೂಪದ (ಸಿಮಿಟ್ರಿಕಲ್) ಅನೇಕ ಮಾದರಿಗಳು ಸಿಕ್ಕುತ್ತವೆ. ಮೆಕ್ಸಿಕೋ ಪೋಲೆಂಡ್‌ಗಳಲ್ಲಿ ಉಪಯೋಗಿಸುವ ವಿಧಾನ ಮತ್ತೂ ಕಠಿಣವಾದುದು. ಸುಮಾರು 50-60 ಕಾಗದಗಳನ್ನು ಪುಸ್ತಕದ ರೂಪದಲ್ಲಿ ಜೋಡಿಸಿಕೊಂಡು ಅದಕ್ಕೆಂದೇ ವಿಶೇಷವಾಗಿ ರೂಪಿಸಿಕೊಂಡ ತೆಳುವಾದ ಉಳಿಯಂತಹ ಉಪಕರಣವನ್ನು ಉಪಯೋಗಿಸುತ್ತಾ ಸುತ್ತಿಗೆಯಿಂದ ಹೊಡೆಯುತ್ತಾ ಒಟ್ಟೊಟ್ಟಿಗೆ ಐವತ್ತರವತ್ತು ಪ್ರತಿಗಳನ್ನು ತೆಗೆಯುತ್ತಾರೆ. (ಸಮಾರಂಭಗಳ ಅಲಂಕರಣೆಗೆ ಹೆಚ್ಚು ಪ್ರತಿಗಳು ಬೇಕಾದಾಗ ಈ ವಿಧಾನ ಉಪಯುಕ್ತವೆನ್ನಿಸುವುದರಿಂದ ನಮುಲ್ಲೂ ಮದುವೆ ಮಂಟಪಗಳನ್ನೂ, ಮಧುಮಂಚಗಳನ್ನೂ ಅಲಂಕರಿಸುವ ಕಲಾವಿದರು ಇದೇ ವಿಧಾನವನ್ನು ಅನುಸರಿಸುತ್ತಾರೆ ಎಂಬುದು ವಿಶೇಷವೆನ್ನಿಸುತ್ತದೆ!) ಸಾಂಝಿಯಲ್ಲಿ ಕಾಗದದ ಮಡಿಕೆಗಳ ಸಂಖ್ಯೆ ಕಡಿಮೆ ಅಥವ ಕೆಲವೊಮ್ಮೆ ಇಲ್ಲವೆಂದರೂ ನಡೆದೀತು. ರಂಗೋಲಿ ವಿನ್ಯಾಸಗಳನ್ನು ರಚಿಸುವಾಗ ನಾಲ್ಕು ಅಥವಾ ಆರು ಮಡಿಕೆ ಮಾಡಿದರೆ ದೇವತೆಗಳ ಚಿತ್ರ ಕತ್ತರಿಸುವಾಗ ಕಾಗದವನ್ನು ಮಡಿಸುವ ಅವಶ್ಯಕಥೆಯೇ ಇಲ್ಲ.
ನಿಂತ ನೀರಾಯಿತೆ?
ಭಕ್ತಿಮಾರ್ಗದ ಆಂಗವಾಗಿ ದೇವಾಲಯಗಳಲ್ಲಿ ಹುಟ್ಟಿಕೊಂಡ ಈ ಕಲೆ ಮೊದಲಿಗೆ ಕೃಷ್ಣನ ಮತ್ತು ರಾಧೆಯರ ವಿವಿಧ ರೂಪಗಳನ್ನು ನಿರೂಪಿಸುವಲ್ಲಿ ಉಪಯೋಗವಾಗುತ್ತಿತ್ತು. ನಂತರ ಭಗವಾನ್ ವಿಷ್ಣು, ಶಕ್ತಿ ದೇವತೆಗಳಾದ ದುರ್ಗೆ, ಕಾತ್ಯಾಯಿನಿ, ಪಾರ್ವತಿ, ಗಣಪತಿ, ಹನುಮಂತ ಮತ್ತು ಇತರ ದೇವತೆಗಳ ಚಿತ್ರಣವೂ ಆರಂಭವಾಯಿತು. ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚು ಉಪಯೊಗದಲ್ಲಿದೆ. ರಂಗೋಲಿಯಲ್ಲಂತೂ ಸರಿಯೇ ಸರಿ. ಈ ರೀತಿ ಎಲ್ಲ ರೀತಿಯ ಜನಪದೀಯ ಅಂಶಗಳಿರುವ ಈ ಕಲೆ ಏಕಾಗಿ ಹೆಚ್ಚು ಜನಪ್ರಿಯವಾಗಿಲ್ಲ?
ಸೃಜನಶೀಲತೆಯನ್ನು ಪ್ರಚೋದಿಸುವ ಎಲ್ಲ ಅಂಶಗಳೂ ಇದ್ದರೂ ಈ ಕಲೆ ಹಲವಾರು ಸಂಪ್ರದಾಯಸ್ಥರ ಕೈಯಲ್ಲೇ ಉಳಿದು ಬಿಟ್ಟಿತ್ತು. ದೇವತೆಗಳ, ದೇವಾಲಯಗಳ ಅಲಂಕರಣೆಯಲ್ಲಿ ಹೆಚ್ಚಾಗಿ ಉಳಿದುಕೊಂಡ ಈ ಕಲೆ ನಿಂತ ನೀರಾಗಲೂ ಸಂಪ್ರದಾಯವಾದಿ ಕಲಾವಿದರೂ ಕಾರಣವಾಗಿರಬಹುದು. ತಾವು ಕಲಿತ ಕಲೆಯನ್ನು ಉದ್ದೇಶಪೂರ್ವಕವಾಗಿ ಗುಪ್ತವಾಗಿಡುವುದರಿಂದ ಮತ್ತು ತಾವು ಅದಕ್ಕಾಗಿ ಬಳಸುವ ವಿಶೇಷ ಕತ್ತರಿ ಚಾಕು ಮೊದಲದವನ್ನು ಇತರರಿಗೆ ತೋರಿಸದೇ ಇರುವುದರಿಂದ ಕಲೆಯ ಹರಿವು ಗುಟ್ಟಾಗಿಯೇ ಉಳಿದಿರಬಹುದು. ‘ಸಾಂಝಿ’ ಎಂದರೆ ಇಷ್ಟೇ. ಈ ಪರಿಧಿಯನ್ನು ಮೀರಿ ಹೊರ ಹೋಗಬಾರದು ಎಂಬ ನಿಯಮಾವಳಿಗಳನ್ನು ಕಟ್ಟುಪಾಡುಗಳನ್ನೂ ಪುರಾತನ ಕಲಾವಿದರು ಹಾಕಿದ್ದೇ ಸಾಂಝಿ ನಿಂತ ನೀರಾಗಲು ಕಾರಣವಾಗಿರಬಹುದು. ವಿಶಾಲಾರ್ಥದಲ್ಲಿ ನೋಡಿದರೆ ಸಾಂಝಿಯಂತಹ ಸೃಜನಶೀಲ ಕಲೆ ಸಹಾ ಕಾಲಕ್ಕೆ ತಕ್ಕಂತೆ ಅಪ್-ಡೇಟ್ ಆಗಿಲ್ಲದಿರುವುದೂ ಇದಕ್ಕೆ ಕಾರಣವಾಗಿರಬಹುದು. ಯಾವುದೇ ಕಲೆ ಕಾಲದ ಜೊತೆಗೆ ಹೆಜ್ಜೆ ಹಾಕುತ್ತಾ ಪರಿವರ್ತನೆಗೊಳ್ಳುತ್ತಾ ಹೋದರೆ ಜನಪ್ರಿಯತೆ ವೇಗ ಹೆಚ್ಚಬಹುದು. ಇಲ್ಲವಾದರೆ ನಿಂತ ನೀರಿನಂತೆ ಚಲನ ರಹಿತವಾಗಿಬಿಡಬಹುದು. ಆನಪ್ರಿಯತೆಯೂ ಕುಂದಬಹುದು. ಈ ಕಾರಣದಿಂದಾಗಿಯೆ ವಂಶಪಾರಂಪರ್ಯವಾಗಿ ದುಡಿಮೆಗಾಗಿ ಸಾಂಝಿಯನ್ನು ಅವಲಂಬಿಸಿದ್ದ ಕುಟುಂಬಗಳು ನಿಧಾನಕ್ಕೆ ಸಾಂಝಿಯನ್ನು ಕೈಬಿಡುತ್ತಾ ಬೇರೆ ಬೇರೆ ವೃತ್ತಿಗಳಿಗೆ ಹೊರಳುತ್ತಿದ್ದಾರೆ.
ಆದರೂ ಒಂದರ್ಥದಲ್ಲಿ ನೋಡಿದರೆ ಸಾಂಝಿ ಇನ್ನೂ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇದೆ. ಸಾಂಝಿ ನಮ್ಮಿಂದ ಸಂಪೂರ್ಣವಾಗಿ ಮರೆಯಾಗಿಲ್ಲ. ಕೈಮಗ್ಗದ ಬಟ್ಟೆಗಳ ವಿನ್ಯಾಸದಲ್ಲಿ, ಪರದೆಗಳ ಡಿಸೈನಿನಲ್ಲಿ, ಮಹಿಳೆಯರ ಹಣೆಯ ಮೇಲಿನ ಬಿಂದಿಯಲ್ಲಿ ಹೀಗೆ ನಾನಾ ನೆಲೆಯಲ್ಲಿ ಜೀವಂತವಾಗಿದೆ. ರಾಜಾಸ್ಥಾನ ಮತ್ತು ಹರ್ಯಾಣದ ಹ್ಯಾಂಡ್‌ಲೂಂನ ತಯಾರಿಕೆಗಳಲ್ಲಿ ಸಾಂಝಿ ವಿನ್ಯಾಸಗಳನ್ನು ಬಳಸಲಾಗುತ್ತದೆ, ಸೀರೆಗಳ ಮತ್ತು ಗೃಹ ಶೋಭೆಯನ್ನು ಹೆಚ್ಚಿಸುವ ಕರ್ಟನ್‌ಗಳಲ್ಲೂ ಈ ವಿನ್ಯಾಸಗಳು ಕಂಡುಬರುತ್ತವೆ, ಮಹಿಳೆಯರ ಕರಗಳನ್ನಲಂಕರಿಸುವ ಮೆಹಂದಿಯ ವಿನ್ಯಾಸಗಳೂ ಸಾಂಝಿಯೇ. ಗ್ರೀಟಿಂಗ್ ಕಾರ್ಡ್ ವಿನ್ಯಾಸಗಾರರೂ, ಸಮಾರಂಭಗಳ ಅಲಂಕಾರ ಮಾಡುವವರೂ ಸಾಂಝಿಯನ್ನು ತಮ್ಮ ವೃತ್ತಿಯಲ್ಲೆ ಅಳವಡಿಸಿಕೊಂಡಿರುತ್ತಾರೆ. ಮತ್ತೊಂದು ದಿಕ್ಕಿನಲ್ಲಿ ಉತ್ತರ ಭಾರತದ ಹಳ್ಳಿಗಳಲ್ಲಿರುವ ಮಹಿಳೆಯರು ತಮಗೇ ಅರಿವಿಲ್ಲದೆ ಸಾಂಝಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಆಧುನಿಕ ತಾಂತ್ರಿಕತೆಯ ಸಹಕಾರದಲ್ಲಿ ಹಲವಾರು ಗ್ರಾಫಿಕ್‌ಗಳಿಗೆ ಈ ಕಲೆಯನ್ನು ಬಳಸಲಾಗುತ್ತಿದೆ. ಸಾಂಝಿಯ ಚಿತ್ರಗಳನ್ನು ಆಧರಿಸಿ ಹಲವಾರು ಅನಿಮೇಶನ್ ಚಿತ್ರಗಳೂ ತಯಾರಾಗಿ ವಿದೇಶಗಳ ಚಿತ್ರೋತ್ಸವಗಳಲ್ಲಿ ಸಮ್ಮಾನ ಗಳಿಸಿವೆ. ತೊಗಲು ಬೊಂಬೆಯಾಟದಂತೆ ಸಾಂಝಿಯನ್ನೂ ಉಪಯೊಗಿಸುವ ಪ್ರಯೋಗಗಳೂ ನಡೆದಿವೆ.
ಮತ್ತೆ ಸಾಂಝಿ
ಹಿಂದೆ ಜನಪ್ರಿಯವಾಗಿದ್ದೂ ಕಾಲಾಂತರದಲ್ಲಿ ಜನರ ಸ್ಮರಣೆಯಿಂದ ಮರೆತೇ ಹೋಗಿದ್ದ “ಗಂಜೀಫಾ” ಕಲೆ ಇತ್ತೀಚೆಗೆ ಕಳೆದೊಂದು ದಶಕದಲ್ಲಿ ಜನಪ್ರಿಯವಾದಂತೆ ಸಾಂಝಿಯನ್ನೂ ಜನಪ್ರಿಯಗೊಳಿಸುವ ಚಟುವಟಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹಲವಾರು ಕಲಾವಿದರು ಸಾಂಝಿಯನ್ನು ಆಧುನಿಕಗೊಳಿಸುವಮೂಲಕ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಾಂಝಿಯಲ್ಲಿ ಮೊದಲಾದ ಹಲವಾರು ಸಾಧ್ಯತೆಗಳನ್ನು ಪರಿಶೀಲಿಸುತ್ತಾ ಭಾರತದ ಒಳಗೂ ಹೊರಗೂ ಅದನ್ನು ಜನಪ್ರಿಯಗೊಳಿಸಲು ಕ್ರಿಯಾಶೀಲರಾಗಿರುವ ಕಲಾವಿದರಿದ್ದಾರೆ. ದೆಹಲಿಯಲ್ಲಿರುವ ‘ಡೆಲ್ಲಿ ಕ್ರಾಫ್ಟ್ ಕೌನ್ಸಿಲ್’ ಸಹಾ ಈ ಕಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸೂರಜ್ ಕುಂಡದ ವಾರ್ಷಿಕ ಕ್ರಾಫ್ಟ್ ಮೇಳದಲ್ಲಿ ಸಾಂಝಿ ಪ್ರಧಾನ ಆಕರ್ಷಣೆಯಾಗಿರುತ್ತದೆ. ಕೆಲವರು ವಿದೇಶೀಯರು ಸಹಾ ‘ಭಾರತೀಯ ಸಾಂಝಿಯ’ಯನ್ನು ಕಾಫ್‌ಮಗ್, ಟೀಟ್ರೇ, ಲ್ಯಾಂಪ್‌ಶೇಡ್‌ಗಳಲ್ಲಿ ಉಪಯೋಗಿಸುವ ಮೂಲಕ ಅದಕ್ಕೆ ವ್ಯಾವಹಾರಿಕ ಆಯಾಮವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದರೆ ಇಲ್ಲಿ ಸಹಾ ಸಾಂಝಿ ಮತ್ತು ಸಾಂಝಿಯಿಂದ ಹುಟ್ಟಿಕೊಂಡಿರಬಹುದಾದ ಹಲವು ಮಾದರಿಯ ಪೇಪರ್ ಕ್ರಾಫ್ಟ್ ಕಲೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಹಲವಾರು ಕಲಾವಿದರು ಕಂಡುಬರುತ್ತಾರೆ.
“ಸಾಂಝಿ ಎಂದರೆ ಅದು ನಮ್ಮ ಜನಪದರಿಂದ ಆವಿಷ್ಕರಿಸಲ್ಪಟ್ಟ ನಮ್ಮದೇ ಕಲೆ. ಅದನ್ನು ಬೇರೆಯದಕ್ಕೆ ಯಾಕೆ ಹೋಲಿಸಬೇಕು. ಅದಕ್ಕೆ ಬೇರೆ ಯಾವುದೇ ಪ್ರಭಾವಳಿ ಬೇಡ.” ಎಂಬುದು ಕರ್ನಾಟಕದ ಸಂದರ್ಭದಲ್ಲಿ ಕ್ರಿಯಾಶೀಲವಾಗಿರುವ ಕಲಾವಿದರಲ್ಲೊಬ್ಬರಾದ ಮೈಸೂರು ಹುಸೇನಿ ಅವರ ವಾದ. “ಶತಮಾನಗಳಿಂದ ನಮ್ಮ ದೇವಾಲಯಗಳಲ್ಲೂ, ಸಾಂಪ್ರದಾಯಿಕ ಸಮಾರಂಭಗಳಲ್ಲೂ ಕಾಗದಗಳ ವಿನ್ಯಾಸಗಳನ್ನು ಸೃಷ್ಟಿಸುತ್ತಿರುವ ನಮ್ಮ ಜನಪದರು ಚೀನಾ, ಜಪಾನ್, ಮೆಕ್ಸಿಕೊ, ಜರ್ಮನಿ, ಸ್ಪೇನ್‌ಗಳಿಗೆ ಹೋಗಿಬಂದವರೇನಲ್ಲ. ಅಥವಾ ಆ ದೇಶಗಳ ಹೆಸರು ಕೇಳಿದವರೂ ಅಲ್ಲ.ಇದು ಇಲ್ಲಿನ ಸಾಂಸ್ಕೃತಿಕ ಹಿನ್ನೆಯಲ್ಲಿಯೇ ಅರಳಿದ ಕಲೆ.” ಎಂಬುದು ಅವರ ಬಲವಾದ ವಾದ. ಬಹಳ ಹಿಂದಿನಿಂದಲೂ ನಮ್ಮಲ್ಲಿ ಬಾಸಿಂಗಗಳನ್ನು ತಯಾರಿಸುವ, ಹತ್ತಿಯ ಪೂಜಾ ಪರಿಕರಗಳನ್ನು ತಯಾರಿಸುವ, ದೇವಾಲಯ ಅಲಂಕರಣೆ ಮಾಡುವ ಮೂಲಕವೇ ಜೀವನಕ್ಕೊಂದು ಮಾರ್ಗವನ್ನು ಕಂಡುಕೊಂಡ ಎಷ್ಟೋ ಕುಟುಂಬಗಳಿದ್ದವು. ಆದರೆ ಅವರೆಲ್ಲ ಈ ಕಲೆಯನ್ನು ತಮ್ಮಲ್ಲೇ ಇಟ್ಟುಕೊಂಡ ಕಾರಣದಿಂದ ಮುಂದಿನ ಪೀಳಿಗೆಗೆ ಈ ಕಲೆ ಸಹಜವಾಗಿ ಹಸ್ತಾಂತರವಾಗಿಲ್ಲ. ಆದರೆ ಜಪಾನ್ ಚೀನಾ ಮೊದಲಾದ ದೇಶಗಳು ಜತನದಿಂದ ಕಾದಿಡುತ್ತ, ಅದರ ಬಗೆಗೆ ಹಲವಾರು ಪುಸ್ತಕಗಳನ್ನು ರಚಿಸಿ ತಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಿ ತಮ್ಮ ಕಲೆಯನ್ನು ನಿರಂತರವಾಗಿ ಜೀವಂತವಾಗಿರಿಸಿಕೊಂಡಿದ್ದಾರಲ್ಲದೆ ಇದು ‘ನಮ್ಮ ಕಲೆ’ ಎಂಬ ಅಭಿಮಾನದಿಂದ ವಿದೇಶಗಳಿಗೂ ನಿರಂತರವಾಗಿ ಪರಿಚಯಿಸುತ್ತಿದ್ದಾರೆ. ಪೇಪರ್ ಕ್ರಾಫ್ಟ್ನ ಬಗ್ಗೆ ತೀವ್ರ ಕುತೂಹಲವಿರುವ ದೇಶಗಳೆಲ್ಲ ಸೇರಿ ಆ ವಿಷಯದ ಮೇಲೆ ಒಂದು ವಿಶ್ವ ಸಮ್ಮೇಳನವನ್ನೂ ನಡೆಸಿದ್ದಾರೆ.
ಸಾಂಝಿ ಇರಬಹುದು, ಸಾಂಝಿಯ ನೆರಳಿನಲ್ಲಿ ಅದರ ಪ್ರಭಾವದಲ್ಲಿ ಹುಟ್ಟಿಕೊಂಡ ಮತ್ತೊಂದು ಕಲೆ ಇರಬಹುದು. ಅವೆಲ್ಲವನ್ನೂ ನಮ್ಮಲ್ಲೂ ಸಹಾ ವಿಸ್ತೃತ ರೀತಿಯಲ್ಲಿ ಇದನ್ನು ಪುನರುಜ್ಜೀವನಗೊಳಿಸಿದರೆ ನಮ್ಮದೇ ಆದ, ಪುರಾತನವೂ, ಜಾನಪದೀಯವೂ ಮತ್ತು ಸಾಂಪ್ರದಾಯಿಕವೂ ಆಗಿರುವ ವಿಶಿಷ್ಟ ಕಲೆಯನ್ನು ಬೆಳಗಿಸಿ ಹೆಮ್ಮೆಯಿಂದ ಲೋಕಕ್ಕೆಲ್ಲ ಪ್ರಸ್ತುತಪಡಿಸಬಹುದು.


By. Keshava kudla
(ಇಲ್ಲಿನ ಚಿತ್ರಗಳ ಕಲಾವಿದರು ಮೈಸೂರು ಹುಸೇನಿ)